ವಿಷಯಕ್ಕೆ ಹೋಗು

ಮತ್ಸ್ಯ ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮತ್ಸ್ಯ ವೈದಿಕ ಭಾರತಇಂಡೋ-ಆರ್ಯನ್ ಬುಡಕಟ್ಟುಗಳಲ್ಲೊಂದು. ವೈದಿಕ ಯುಗದ ಉತ್ತರಾರ್ಧದ ವೇಳೆಗೆ, ಅವರು ಕುರು ರಾಜ್ಯದ ದಕ್ಷಿಣಕ್ಕೆ ಮತ್ತು ಪಾಂಚಾಲ ರಾಜ್ಯವನ್ನು ಪ್ರತ್ಯೇಕಿಸುತ್ತಿದ್ದ ಯಮುನಾ ನದಿಯ ಪಶ್ಚಿಮಕ್ಕೆ ಸ್ಥಿತವಾಗಿದ್ದ ಒಂದು ರಾಜ್ಯವನ್ನು ಆಳುತ್ತಿದ್ದರು. ಅದು ಸರಿಸುಮಾರು ರಾಜಸ್ಥಾನದ ಹಿಂದಿನ ಜೈಪುರ್ ರಾಜ್ಯವನ್ನು ಹೋಲುತ್ತಿತ್ತು, ಮತ್ತು ಸಂಪೂರ್ಣ ಅಲ್ವಾರ್ ಹಾಗೂ ಭರತ್‍ಪುರ್‌ನ ಭಾಗಗಳನ್ನು ಒಳಗೊಂಡಿತ್ತು.