ವಿಷಯಕ್ಕೆ ಹೋಗು

ಮಹಾಬಲ ಸೀತಾಳಭಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಬಲ ಸೀತಾಳಭಾವಿಯವರು ಉತ್ತರಕನ್ನಡದ ಸಿದ್ಧಾಪುರದಲ್ಲಿ ೧೯೮೩ರಲ್ಲಿ ಜನಿಸಿದರು. ಇವರು ಯುವ ಪತ್ರಕರ್ತರಾಗಿ, ವಿದ್ವಾಂಸರಾಗಿ ಪ್ರಸಿದ್ದರು. ಪ್ರಸ್ತುತ ಇವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಮಹಾಬಲ ಸೀತಾಳಭಾವಿಯವರ ತಂದೆಯ ಹೆಸರು ವಿಶ್ವೇಶ್ವರ ಭಟ್ ಸೀತಾಳಭಾವಿ. ಬಾಲ್ಯದಿಂದಲೂ ಅವರಿಗೆ ಸಿನಿಮಾ ಹಾಗೂ ಸಾಹಿತ್ಯ ವಿಚಾರಗಳಲ್ಲಿ ಆಸಕ್ತಿ ಇತ್ತು. ಇವರು ಸಂಸ್ಕೃತ ಹಾಗೂ ಆಂಗ್ಲ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಶಿಕ್ಷಣ

[ಬದಲಾಯಿಸಿ]

ಮಹಾಬಲ ಸೀತಾಳಭಾವಿಯವರು ತಮ್ಮ ಉನ್ನತ ವಿದ್ಯಾಬ್ಯಾಸವನ್ನು ಮೈಸೂರಿನಲ್ಲಿ ಪಡೆದರು. ಅವರು ಸಂಸ್ಕ್ರತ ತರ್ಕಶಾಸ್ತ್ರ ವಿದ್ವತ್,ಮಾಧ್ಯಮ ಹಾಗು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದರು.

ವೃತ್ತಿ ಜೀವನ

[ಬದಲಾಯಿಸಿ]

ಉದಯ ಟಿವಿ, ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಹಾಗೂ ಉದಯವಾಣಿ ಮತ್ತು ಕನ್ನಡಪ್ರಭದಲ್ಲಿ ಕೆಲಸ ಮಾಡಿರುವ ಅವರು ಪ್ರಸ್ತುತ ಸಂಯುಕ್ತ ಕರ್ನಾಟಕ ದೈನಿಕದ ಪ್ರಧಾನ ಸಂಪಾದಕರಾಗಿದ್ದಾರೆ. ಇವರ ಪತ್ನಿ ರೇಖಾ, ಮಗಳು ಸುಷೀಮಾ, ಮಗ ಸುಷಿರ್. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.[]

ಆಸಕ್ತಿಯ ಕ್ಷೇತ್ರಗಳು

[ಬದಲಾಯಿಸಿ]

ಪ್ರವಾಸ

  • ಛಾಯಗ್ರಹಣ

ಮುಖ್ಯ ಕೃತಿಗಳು

[ಬದಲಾಯಿಸಿ]
  • ನಿತ್ಯಜೀವನಕ್ಕೆ ಹತ್ತಿರದ ಸುಭಾಷಿತಗಳು
  • ನೂರೆಂಟು ಸುಭಾಷಿತಗಳು
  • ಮ್ಯಾನೇಜ್ಮೆಂಟ್ ಭಗವದ್ಗೀತೆ
  • ಚಾಣಕ್ಯನೀತಿ
  • ಆಂಟನ್ ಚೆಕಾ‌ಫ್ ಕಥೆಗಳು
  • ಲೋಕಪಾಲ: ಯಾಕಿಷ್ಟು ಗೊಂದಲ
  • ನಾಯಕತ್ವದ ದಾರಿ ಪಂಚತಂತ್ರದ ಮಾದರಿ
  • ಚಾಟು ಕವಿತೆಗೆ ಚುಟುಕು ಕತೆ
  • ವಾರನ್ ಬಫೆಟ್
  • ವಂದನಾಶಿವ
  • ಸುಂದರಲಾಲ ಬಹುಗುಣ
  • ೧೦೮ ಹಳೆ ಆಚಾರ ಹೊಸ ವಿಚಾರ
  • ಮ್ಯಾನೇಜ್ಮೆಂಟ್ ಕತೆಗಳು
  • ಈ ತಪ್ಪು ನೀವು ಮಾಡಬೇಡಿ
  • ವಿದ್ಯಾರ್ಥಿ ವಿಜಯ
  • ಇಂಟರ್ನೆಟ್ ಕಥೆಗಳು[]

ಅನುವಾದಿಸಿದ ಕೃತಿಗಳು

[ಬದಲಾಯಿಸಿ]
  • ಪ್ರಿಯಂವದೆಯ ಸ್ವಗತ ಹಿಂದಿಗೆ ಅನುವಾದಗೊಂಡಿದೆ
  • ಆಂಟನ್ ಚೆಕಾ‌ಫ್ ಕಥೆಗಳು
  • ಭಾಸನ ಐದು ನಾಟಕಗಳು
  • ಅಭಿಜ್ಞಾನ ಶಾಕುಂತಲ
  • ಕಾಳಿದಾಸನ ಮೇಘದೂತ
  • ಸಂಪೂರ್ಣ ಚಾಣಕ್ಯ ನೀತಿ ಮತ್ತು ಅರ್ಥಸಂಗ್ರಹ

ಪ್ರಶಸ್ತಿಗಳು

[ಬದಲಾಯಿಸಿ]
  • ಚೆನೈ ಅಂತರಾಷ್ಟ್ರೀಯ ಕಿರುಚಿತ್ರ ಮಂಡಳಿಯ ಪ್ರಶಂಸೆ
  • ಮುಂಬೈ,ದೆಹಲಿ ಹಾಗೂ ಅಮೇರಿಕಾ ಕನ್ನಡ ಸಂಘದ ಪ್ರಶಸ್ತಿ
  • ೨೦೦೫ರ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದ ಪ್ರಶಸ್ತಿ (೨೦೦೫)
  • ೨೦೨೫ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ
  • ಅಖಿಲ ಕರ್ನಾಟಕ ಹವ್ಯಕ ಮಹಾಸಭೆಯ ಹವ್ಯಕರತ್ನ ಪ್ರಶಸ್ತಿ
  • ಛಾಯಗ್ರಹಣಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ[]

ಉಲ್ಲೇಖ

[ಬದಲಾಯಿಸಿ]