ಸದಸ್ಯ:Noyalthomas123/sandbox
Appearance
ಆತ್ಮಬಲ ಭಗವಂತನ ಅದ್ಭುತ ಸೃಷ್ಟಿಯಲ್ಲಿ ಒಂದು ಮಾನವನ ಸೃಷ್ಟಿ. ಆತ ಮಾನವನಿಗೆ ಉಳಿದ ಎಲ್ಲಾ ಜೀವಿಗಳಿಗಿಂತ ಹೆಚ್ಚು ಶಕ್ತಿ, ಸಾಮಾಥ್ಯವನ್ನು ನೀಡಿದ್ದಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ಜೀವನಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಜನತೆ ತಮ್ಮ ಸುಖಕ್ಕಿಂತ ಹೆಚಹಚು ದು:ಖಕ್ಕೆ ಪ್ರಾಮುಖ್ಯ ಕೊಡುತ್ತಾರೆ. ಏನನ್ನೋ ಪಡೆದುಕೊಂಡ ಸಂತೋಷಕ್ಕಿಂತ ಹೆಚ್ಚು ಏನಾನ್ನಾದರೂ ಕಳೆದುಕೊಂಡ ದು:ಖವೇ ಕಾಡುತ್ತದೆ. ಯಾವುದೇ ತೊಂದರೆ ಬರಲಿ ಚಿಂತೆಗೆ ಬಿದ್ದು ಒದ್ದಾಡುತ್ತಾರೆ. ಜೀವನದಲ್ಲಿ ಯಾರಿಗೆ ಕಷ್ಟ ಬರುವುದಿಲ್ಲ ಹೇಳಿ? ನಮಗೆ ಎಷ್ಟೇ ಕಷ್ಟ ಬಂದರು ಅದನ್ನು ಎದುರಿಸುವೆ ಎನ್ನುವ ಶಕ್ತಿ ಸಾಮಾಥ್ಯ ನಮ್ಮಲ್ಲಿರಬೇಕು. ಕಷ್ಟವು ಕೂಡ ಅದೇ ರೀತಿ, ಆದರೆ ಆ ಕಷ್ಟವನ್ನು ಎದುರಿಸಲು ನಮ್ಮಲ್ಲಿ ಆತ್ಮಬಲವಿರಬೇಕು. ಯಾವುದೇ ಕಾಯವನ್ನು ಸಾಧಿಸಲು ಸಾಧ್ಯವಾದ ಶಕ್ತಿ ನಮ್ಮಲ್ಲಿರಬೇಕು. ಆದರೆ ಅದಕ್ಕಾಗಿ ಮನಸ್ಸು ಮತ್ತು ಆತ್ಮಬಲ ಬೇಕು. ಮಾನವನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಲೇಬೇಕು.