ಸದಸ್ಯ:Shashanka158
![](http://upload.wikimedia.org/wikipedia/kn/thumb/5/55/Soudha.jpg/210px-Soudha.jpg)
ಮೂಲ ಮಾಹಿತಿ[ಬದಲಾಯಿಸಿ]
ನಾನು ಶಶಾಂಕ.ಎಮ್ ಹುಟ್ಟಿದ್ದು ಬೆಂಗೂರಿನಲ್ಲಿ ತಂದೆಯ ಹೆಸರು ಮಂಜುನಾಥ್ ಹಾಗು ತಾಯಿ ರೂಪ.ನಾನು ಬೆಂಗಳೂರಿನ ಯಲಹಂಕ ಎಂಬುವ ಸ್ಥಳದಲ್ಲಿ ಸುಮಾರು ೧೦ ಗಂಟೆಗೆ ಬೆಳಗ್ಗೆ ೮/೬/೨೦೦೦ರಂದು ಜನಿಸಿದೆ.
![](http://upload.wikimedia.org/wikipedia/commons/thumb/d/d2/Aerial_view_of_basketball_court%2C_Christ_University%2C_Bangalore.jpg/210px-Aerial_view_of_basketball_court%2C_Christ_University%2C_Bangalore.jpg)
ವಿದ್ಯಭ್ಯಾಸ[ಬದಲಾಯಿಸಿ]
ನಾನು ನನ್ನ ಪ್ರಾರ್ಥಮಿಕ ವಿಧ್ಯಾಭ್ಯಾಸವನ್ನು ಶ್ರೀ ಮಾರುತಿ ವಿದ್ಯಾಮಂದಿರ ದಾಲ್ಲಿ ಮುಗಿಸಿದೆನು ಹಾಗೂ ಪ್ರೌಡ ವಿದ್ಯಾಭ್ಯಾಸವನ್ನು ಶ್ರೀ ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ಮುಗಿಸಿದೆ.ಚಿಕ್ಕ ವಯಸ್ಸಿನಿಂದಲೂ ನಾನು ಒಬ್ಬ ಒಳ್ಳೆಯ ಕ್ರೀಡಾಪಟು.ಅದರಲ್ಲಿ ನನ್ನ ಸಾಧನೆಯು ತುಂಬಾನೇ ಇದೆ.ನಾನು ಓದುತ್ತಾ ಕಾಲೇಜು ಮೆಟ್ಟಿಲು ಹತ್ತಿದೆ ಹಾಗೂ ನಾನು ನನ್ನ ಕಾಲೇಜಿನ ವಿದ್ಯಾಬಾಸವನ್ನು ಬೆಂಗಳೂರಿನ ಶ್ರೀ ಸರಸ್ವತಿ ವಿದ್ಯಾನಿಕೇತನ ದಲ್ಲಿಯೆ ಮಾಡಿದೆ.ಕಾಲೇಜಿನ ಸಮಯದಲ್ಲಿ ನಾನು ರಾಷ್ಟ್ರ ಮಟ್ಟದಲ್ಲಿ ಕ್ರೀಡೆ ಅಂದರೆ ವಾಲಿ ಬಾಲ್ ಕ್ರೀಡೆಯಲ್ಲಿ ಉತ್ತಮ ಆಟ ಆಡುತ್ತೀದೆನು.ಶಾಲೆಯಲ್ಲಿ ಹೆಚ್ಚಿನದಾಗಿ ಸಾಂಸೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ನನ್ನಲ್ಲಿ ಇತ್ತು,
ನನ್ನ ಇಷ್ಟವಾದ ವ್ಯಕ್ತಿಗಳು[ಬದಲಾಯಿಸಿ]
ನನ್ನ ಮೆಚ್ಚಿನ ಗೆಳೆಯ ಎಂದರೆ ಪವನ್ ರಾಜ್.ಬಾಲ್ಯದ ಗೆಳೆಯ,ನಿಜವಾಗಿ ಹೇಳಬೇಕೆಂದರೆ ಚಡ್ಡಿದೋಸ್ತ್.ನನ್ನ ಅವನ ಸಂಬಂಧ ಎಂದಿಗೂ ಮುಗಿಯುವುದಿಲ್ಲ.ಮತ್ತು ನಾನು ಆದರೆ ನಾನು ಕಾಲೇಜಿನ ಮೆಟ್ಟಿಲು ಏರಿದಾಗ ಆದರ ಮೇಲಿನ ಆಸಕ್ತಿ ಕಡಿಮೆ ಅಯಿತು. ಬಾಲ್ಯದಲ್ಲಿ ನಾನು ಮತ್ತೂ ನನ್ನ ಗೆಳೆಯರು ಸೇರಿ ಅತೀ ಹೆಚ್ಚಿನದಾಗಿ ಗೋಲಿ , ಚೂ ಚೆಂಡು ಆಟಗಳನ್ನು ಆಡುತ್ತ ಬಾಲ್ಯವನ್ನು ಕಳೆದೆವು.ಬಾಲ್ಯದ ನೆನಪುಗಳನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲಾ,ಹಾಗೆಯೆ ನಮ್ಮ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ, ಮತ್ತು ಕಳ್ಳತನದಲ್ಲಿ ಕದ್ದು ತಿಂದ ಮಾವಿನ ಕಾಯಿ , ಸೇಬು , ಕಲ್ಲಂಗಡಿ , ಹಾಗು ನಮ್ಮ ಹುಡುಗರ ನೆಚ್ಚಿನ ಮರಗೆಣಸು . ಕದ್ದು ತಿನ್ನುವುದರ ಆನಂದ ಅದರಲ್ಲಿ ಸಿಗುವ ಸಂತೋಷ ಹಣ ಕೊಟ್ಟು ತಿಂದರು ಬಾರದು.
![](http://upload.wikimedia.org/wikipedia/commons/thumb/3/38/Volleyball_game.jpg/210px-Volleyball_game.jpg)
ನನ್ನ ಆಸಕ್ತಿಗಳು ಮತ್ತೆ ಗುರಿಗಳು[ಬದಲಾಯಿಸಿ]
ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿತು.ವಾಲಿ ಬಾಲ್ ಹಾಗು ಕ್ರಿಕೆಟ್ ನಲ್ಲಿ ಹೆಚ್ಚಿನ ಆಸಕ್ತಿ ಮೂಡಿತು.ಹಾಗು ನನ್ನ ಓದಿನ ಬಗ್ಗೆ ಹೇಳಬೇಕೆಂದರೆ ನಾನು ಓದಿನಲ್ಲಿ ಹೇಳಿಕೊಳ್ಳುವಂತಹ ಪ್ರವೀಣನಲ್ಲ. ಎಲ್ಲರ ರೀತಿ ಓದುವ ಹುಡುಗ. ನನ್ನ ಅತೀ ದೊಡ್ದ ಸಾಧನೆ ಎಂದರೆ ಪದವಿ ಪೂರ್ವ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದು.ನನ್ನ ಆಸಕ್ತಿ ಓದುವುದು ,ಕ್ರೀಡೆಗಳಲ್ಲಿ ಭಾಗವಹಿಸುವುದು, ಹಾಗು ನಾಯಕನ ಗುಣಗಳನ್ನು ಪಡೆಯುವುದು . ಮತ್ತು ನನ್ನ ಜೀವನದಲ್ಲಿ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು.ಮತ್ತು ನನಗೆ ಒಬ್ಬ ಒಳ್ಳೆಯ ಸಾಧಾರಣ ವ್ಯಕ್ತಿಯಾಗುವ ಆಸೆ ಇದೆ.ಸ್ನೇಹಿತರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಆಸೆ ಇದೆ, ಮೊದಲಿಂದಲೂ ಕಷ್ಟ ಎಂದವರಿಗೆ ಸಹಾಯ ಮಾಡಿದ್ದೇನೆ ಅದೇ ರೀತಿ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದೇನೆ.ಮತ್ತೂ ನನ್ನ ಜೀವನದ ಮತ್ತೊಂದು ಧ್ಯೇಯ ಎಂದರೆ ಕನ್ನಡಿಗನಾಗೀಯೆ ನನ್ನ ಜೀವನವನ್ನು ಕಳೆಯುವುದು .ಮತ್ತೂ ಕನ್ನಡಕ್ಕಾಗಿ ಏನಾದರು ಕೊಡುಗೆಯನ್ನು ನೀಡುವುದು. ನಮ್ಮ ಏರಿಯಾದಲ್ಲಿ ನಾವೂ ಕನ್ನಡ ರಾಜ್ಯೋಸ್ತವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ನವೆಂಬರ್ ತಿಂಗಳಿನಲ್ಲಿ ನಮ್ಮ ಹುಡುಗರನ್ನು ಹಿಡಿಯಲು ಸಾಧ್ಯವಿಲ್ಲ.ಇಲ್ಲಿಯವರೆಗೂ ಈರೀತಿಯ ಸ್ವಭಾವದಲ್ಲಿ ಬೆಳೆದಿರುವ ನಾನು ಮುಂದೆಯೂ ಇದೇ ರೀತಿ ಬಾಳಲು ಆಶಿಸುತ್ತೇನೆ.
" ""#ಜೈ ಕರ್ನಾಟಕ ಮಾತೆ."" " "#ಜೈ ಶ್ರೀ ರಾಮ್ "